ತರೀಕೆರೆಯ ಐ.ಡಿ.ಬಿ.ಐ ಬ್ಯಾಂಕ್ ವತಿಯಿಂದ ದಿನಾಂಕ 8 12 2025 ರಂದು ದೋರನಾಳು ಗ್ರಾಮ ಬಯಲು ರಂಗ ಮಂದಿರದಲ್ಲಿ ದಲ್ಲಿ ರೈತರಿಗೆ ಕೃಷಿ ಸಾಲ ಮೇಳವನ್ನು ಏರ್ಪಡಿಸಲಾಗಿದೆ ಎಂದು ಐ.ಡಿ.ಬಿ.ಐ ಬ್ಯಾಂಕಿನ ವ್ಯವಸ್ಥಾಪಕರಾದ ಶ್ರೀ ಶಿವನಗೌಡ ಬಿರಾದರ್ ರವರು ತಿಳಿಸಿದ್ದಾರೆ. ಕೃಷಿ ಸಾಲ ಮೇಳ ದಲ್ಲಿ ರೈತರಿಗೆ ಆಕರ್ಷಕ ಬಡ್ಡಿ ದರದಲ್ಲಿ ಬೆಳೆ ಸಾಲ, ವಾಹನ ಸಾಲ ,ಉಗ್ರಾಣ ಸಾಲ, ಸಂಸ್ಕರಣ ಘಟಕ ಸಾಲ, ಡೆವಲಪ್ಮೆಂಟ್ ಸಾಲ, ವನ್ನು ಸುಲಭ ಮತ್ತು ತ್ವರಿತ ಗತಿಯಲ್ಲಿ ನೀಡಲಾಗುವುದು ಆಸಕ್ತ ರೈತರು ಈ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.
ತರೀಕೆರೆ: ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ವೃಂದದ ಸಿಬ್ಬಂದಿಗಳು ತರೀಕೆರೆ ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿ ,ತಮ್ಮ ಕುಟುಂಬದವರ ಪಡಿತರ ಚೀಟಿಗಳನ್ನು ರದ್ದುಪಡಿಸದಂತೆ ಶಾಸಕ ಜಿ.ಎಚ್ ಶ್ರೀನಿವಾಸ್ ರವರಿಗೆ ಪಂಚಾಯಿತಿ ನೌಕರರು ಮನವಿ ಮಾಡಿದರು. ಆಹಾರ ಮತ್ತು ನಾಗರಿಕ ಸರಬರಾಜು ಸಚಿವರ ಬಳಿ ಮಾತನಾಡುವಂತೆ ಹಾಗೂ ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಸರ್ಕಾರದ ಗಮನ ಸೆಳೆಯುವಂತೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು ಈ ಬಗ್ಗೆ ಈಗಾಗಲೇ ಸರ್ಕಾರದ ಗಮನಕ್ಕೆ ತಂದಿದ್ದು ಮತ್ತೊಮ್ಮೆ ಸಚಿವರ ಜೊತೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲಾಗುವುದೆಂದು ತಿಳಿಸಿದರು.
ತರೀಕೆರೆ,- ನ, 22 -- ಸಮಸ್ತ ನಾಗರಿಕ ಜನತೆಗೆ ಆಯುರ ಆರೋಗ್ಯ ಮತ್ತು ಸುಖ ಶಾಂತಿ , ಆ ಪರಮಾತ್ಮ ಕರುಣಿಸಲಿ ಎಂದು ಶುಭ ಹಾರೈಸಿದ ಹಾಲು ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮಿಗಳು ಎಲ್ಲಾ ರೋಗಿಗಳು ಶೀಘ್ರವಾಗಿ ಗುಣಮುಖರಾಗಬೇಕು ಎಂದು ಹಾರೈಸಿದರು. ಅವರು ಇಂದು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ತಮ್ಮ ಜನ್ಮದಿನದ ಪ್ರಯುಕ್ತ ರೋಗಿಗಳಿಗೆ ಬ್ರೆಡ್ಡು, ಬಿಸ್ಕೆಟ್, ಹಣ್ಣು, ಸಿಹಿ ಮತ್ತು ನೀರು ವಿತರಿಸಿದರು. ಈ ಸಂದರ್ಭದಲ್ಲಿ ಡಾಕ್ಟರ್ ದೇವರಾಜ್ ಮಾತನಾಡಿ ನಾನು ಪರ ಊರಿಗೆ ವರ್ಗಾವಣೆಯಾಗಿದ್ದರೂ ಸ್ವಾಮೀಜಿಯವರು ಫೋನ್ ಮಾಡಿ ಕರೆಸಿಕೊಂಡು ಜನ್ಮದಿನದ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲು ಸರ್ಕಾರಿ ಆಸ್ಪತ್ರೆ ಆಯ್ಕೆ ಮಾಡಿಕೊಂಡಿರುವುದಕ್ಕೆ ಧನ್ಯವಾದ ತಿಳಿಸಿದರು. ವೈದ್ಯಾಧಿಕಾರಿಯಾದ ಡಾ,ಚನ್ನಬಸಪ್ಪ ಮಾತನಾಡಿ ಸ್ವಾಮೀಜಿಗಳು ಪ್ರತಿವರ್ಷ ಆಸ್ಪತ್ರೆಗೆ ಬಂದು ತಮ್ಮ ಜನ್ಮದಿನದ ಪ್ರಯುಕ್ತ ಎಲ್ಲಾ ರೋಗಿಗಳಿಗೆ ಬೇಗ ಗುಣಮುಖರಾಗಲಿ ಎಂದು ಆಶೀರ್ವಾದ ಮಾಡಿ ಅವರಿಗೆ ಹಣ್ಣು ಹಂಪಲು ಸಿಹಿಯನ್ನು ವಿತರಿಸುತ್ತಿದ್ದಾರೆ ಆದ್ದರಿಂದ ಅವರಿಗೆ ನಾನು ನಮಸ್ಕಾರಗಳನ್ನು ತಿಳಿಸುತ್ತೇನೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಪ್ರಸೂತಿ ತಜ್ಞರಾದ ಡಾ, ಸಿಂಧುರವರು ಹಾಗೂ ರೋಗಿಗಳು ಆಸ್ಪತ್ರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮನೆ ಕಳ್ಳತನ ನಡೆದ ಎರಡೇ ದಿನದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ತರೀಕೆರೆ ಪೊಲೀಸರು ಯಶಸ್ವಿಯಾಗಿದ್ದಾರೆ. ದಿನಾಂಕ 19/ 11/ 2025ರಂದು ತರೀಕೆರೆ ತಾಲೂಕಿನ ಎರೆಹಳ್ಳಿ ಗ್ರಾಮದ ಆಶಾ ಎಂಬುವವರ ಮನೆಯ ಮೇಲ್ಚಾವಣಿ ಮುರಿದು 96 ಗ್ರಾಂ ಚಿನ್ನ ಮತ್ತು 8000 ನಗದು ಕಳ್ಳತನವಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅದೇ ಗ್ರಾಮದ ರಾಮಕೃಷ್ಣ ಮತ್ತು ಮೇಘರಾಜ್ ಎಂಬ ಕಳ್ಳರನ್ನು ಪತ್ತೆ ಮಾಡಿ ಅವರಿಂದ ಒಂಬತ್ತು ಲಕ್ಷದ 63 ಸಾವಿರ ಮೌಲ್ಯದ ಚಿನ್ನಾಭರಣ ಮತ್ತು 4, 400 ಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ಈ ಕಾರ್ಯಚರಣೆಯಲ್ಲಿ ತರೀಕೆರೆ ಪೊಲೀಸ್ ನಿರೀಕ್ಷಕರಾದ ರಾಮಚಂದ್ರ ನಾಯಕ್, ಪಿಎಸ್ಐ ಗಳಾದ ಮಂಜುನಾಥ್ ಮನ್ನಂಗಿ, ದೇವೇಂದ್ರ ರಾಥೋಡ್, ಹಾಗೂ ಸಿಬ್ಬಂದಿಗಳಾದ ರಾಮಪ್ಪ, ರುದ್ರೇಶ್, ರಿಯಾಜ್, ಧನಂಜಯ ಸ್ವಾಮಿ, ಶ್ರೀನಿವಾಸ್, ರವರು ಭಾಗವಹಿಸಿದ್ದರು. ಈ ಕಾರ್ಯಚರಣೆಯನ್ನು ಚಿಕ್ಕಮಗಳೂರು ಜಿಲ್ಲಾ ಪೊಲೀಸರು ಅಧಿಕ್ಷಕರಾದ ವಿಕ್ರಮ ಅಮಟೆ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಿ.ಟಿ ಜಯಕುಮಾರ್ ಮತ್ತು ತರೀಕೆರೆ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷರಾದ ಪರಶುರಾಮಪ್ಪ ನವರು ಶ್ಲಾಘಿಸಿದ್ದಾರೆ.
ತರೀಕೆರೆಯ ಐ.ಡಿ.ಬಿ.ಐ ಬ್ಯಾಂಕ್ ವತಿಯಿಂದ ದಿನಾಂಕ 8 12 2025 ರಂದು ದೋರನಾಳು ಗ್ರಾಮ ಬಯಲು ರಂಗ ಮಂದಿರದಲ್ಲಿ ದಲ್ಲಿ ರೈತರಿಗೆ ಕೃಷಿ ಸಾಲ ಮೇಳವನ್ನು ಏರ್ಪಡಿಸಲಾಗಿದೆ ಎಂದು ಐ.ಡಿ.ಬಿ.ಐ ಬ್ಯಾಂಕಿನ ವ್ಯವಸ್ಥಾಪಕರಾದ ಶ್ರೀ ಶಿವನಗೌಡ ಬಿರಾದರ್ ರವರು ತಿಳಿಸಿದ್ದಾರೆ. ಕೃಷಿ ಸಾಲ ಮೇಳ ದಲ್ಲಿ ರೈತರಿಗೆ ಆಕರ್ಷಕ ಬಡ್ಡಿ ದರದಲ್ಲಿ ಬೆಳೆ ಸಾಲ, ವಾಹನ ಸಾಲ ,ಉಗ್ರಾಣ ಸಾಲ, ಸಂಸ್ಕರಣ ಘಟಕ ಸಾಲ, ಡೆವಲಪ್ಮೆಂಟ್ ಸಾಲ, ವನ್ನು ಸುಲಭ ಮತ್ತು ತ್ವರಿತ ಗತಿಯಲ್ಲಿ ನೀಡಲಾಗುವುದು ಆಸಕ್ತ ರೈತರು ಈ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಮೈ ದುಂಬಿಹರಿಯುತಿರುವ ಜಂಬದಹಳ್ಳ ಜಲಾಶಯಕ್ಕೆ ಶಾಸಕರಾದ G.H ಶ್ರೀನಿವಾಸ ರವರಿಂದ ಬಾಗಿನ ಸಮರ್ಪಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಮುಖಂಡರಾದ ಟಿ. ಎನ್. ಜಗದೀಶ್, ದರ್ಶನ್ duglapura, ರವಿ ಶಾಂತಿಪುರ, ಮತ್ತು ಸಿದ್ದರಹಳ್ಳಿ ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.
ತರೀಕೆರೆ: ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ವೃಂದದ ಸಿಬ್ಬಂದಿಗಳು ತರೀಕೆರೆ ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿ ,ತಮ್ಮ ಕುಟುಂಬದವರ ಪಡಿತರ ಚೀಟಿಗಳನ್ನು ರದ್ದುಪಡಿಸದಂತೆ ಶಾಸಕ ಜಿ.ಎಚ್ ಶ್ರೀನಿವಾಸ್ ರವರಿಗೆ ಪಂಚಾಯಿತಿ ನೌಕರರು ಮನವಿ ಮಾಡಿದರು. ಆಹಾರ ಮತ್ತು ನಾಗರಿಕ ಸರಬರಾಜು ಸಚಿವರ ಬಳಿ ಮಾತನಾಡುವಂತೆ ಹಾಗೂ ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಸರ್ಕಾರದ ಗಮನ ಸೆಳೆಯುವಂತೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು ಈ ಬಗ್ಗೆ ಈಗಾಗಲೇ ಸರ್ಕಾರದ ಗಮನಕ್ಕೆ ತಂದಿದ್ದು ಮತ್ತೊಮ್ಮೆ ಸಚಿವರ ಜೊತೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲಾಗುವುದೆಂದು ತಿಳಿಸಿದರು.
ಮನೆ ಕಳ್ಳತನ ನಡೆದ ಎರಡೇ ದಿನದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ತರೀಕೆರೆ ಪೊಲೀಸರು ಯಶಸ್ವಿಯಾಗಿದ್ದಾರೆ. ದಿನಾಂಕ 19/ 11/ 2025ರಂದು ತರೀಕೆರೆ ತಾಲೂಕಿನ ಎರೆಹಳ್ಳಿ ಗ್ರಾಮದ ಆಶಾ ಎಂಬುವವರ ಮನೆಯ ಮೇಲ್ಚಾವಣಿ ಮುರಿದು 96 ಗ್ರಾಂ ಚಿನ್ನ ಮತ್ತು 8000 ನಗದು ಕಳ್ಳತನವಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅದೇ ಗ್ರಾಮದ ರಾಮಕೃಷ್ಣ ಮತ್ತು ಮೇಘರಾಜ್ ಎಂಬ ಕಳ್ಳರನ್ನು ಪತ್ತೆ ಮಾಡಿ ಅವರಿಂದ ಒಂಬತ್ತು ಲಕ್ಷದ 63 ಸಾವಿರ ಮೌಲ್ಯದ ಚಿನ್ನಾಭರಣ ಮತ್ತು 4, 400 ಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ಈ ಕಾರ್ಯಚರಣೆಯಲ್ಲಿ ತರೀಕೆರೆ ಪೊಲೀಸ್ ನಿರೀಕ್ಷಕರಾದ ರಾಮಚಂದ್ರ ನಾಯಕ್, ಪಿಎಸ್ಐ ಗಳಾದ ಮಂಜುನಾಥ್ ಮನ್ನಂಗಿ, ದೇವೇಂದ್ರ ರಾಥೋಡ್, ಹಾಗೂ ಸಿಬ್ಬಂದಿಗಳಾದ ರಾಮಪ್ಪ, ರುದ್ರೇಶ್, ರಿಯಾಜ್, ಧನಂಜಯ ಸ್ವಾಮಿ, ಶ್ರೀನಿವಾಸ್, ರವರು ಭಾಗವಹಿಸಿದ್ದರು. ಈ ಕಾರ್ಯಚರಣೆಯನ್ನು ಚಿಕ್ಕಮಗಳೂರು ಜಿಲ್ಲಾ ಪೊಲೀಸರು ಅಧಿಕ್ಷಕರಾದ ವಿಕ್ರಮ ಅಮಟೆ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಿ.ಟಿ ಜಯಕುಮಾರ್ ಮತ್ತು ತರೀಕೆರೆ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷರಾದ ಪರಶುರಾಮಪ್ಪ ನವರು ಶ್ಲಾಘಿಸಿದ್ದಾರೆ.
ಮಾದರಿ ನೆರೆಹೊರೆ, ಮಾದರಿ ಸಮಾಜ, ರಾಷ್ಟ್ರೀಯ ಅಭಿಯಾನ-- ಸಯಾದ್ ಇಸ್ಮಾಯಿಲ್.................... ತರೀಕೆರೆ, ನ, 21 -- ಮನುಷ್ಯರಾಗಿ ಜನಿಸಿದ ನಾವು ನೆರೆಹರೆಯವರೊಂದಿಗೆ ಪ್ರೀತಿ ವಿಶ್ವಾಸ ಸಹಕಾರ ಸೌಹಾರ್ದ ಮನೋಭಾವದಿಂದ ವರ್ತಿಸಿದರೆ ಸಮಾಜದಲ್ಲಿ ಸೌಹಾರ್ದ ಸಹಕಾರಗಳು ನೆಲೆಗೊಳ್ಳುತ್ತದೆ ಕೋಪ ದ್ವೇಷವನ್ನು ತೊರೆದು ಶಾಂತಿ ಸೌಹಾರ್ದತೆ ಸ್ಥಾಪಿಸಬೇಕು ಎಂದು ಜಮಾತೆ ಇಸ್ಲಾಮಿ ಹಿಂದು ಸಂಘಟನೆಯ ತರೀಕೆರೆ ತಾಲೂಕು ಅಧ್ಯಕ್ಷರಾದ ಸೈಯದ್ ಇಸ್ಮಾಯಿಲ್ ಹೇಳಿದರು. ಅವರು ಇಂದು ಪಟ್ಟಣದ ಜಮಾತಿ ಇಸ್ಲಾಮಿ ಹಿಂದ್ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಹೇಳಿದರು. ಮಾನವ ಹಕ್ಕುಗಳ ಬಗ್ಗೆ ಮತ್ತು ಟ್ರಾಫಿಕ್ ನಿಯಮಗಳ ಕುರಿತು ಜಾಗೃತಿ ಸಮಾವೇಶ ಮಾಡುವುದು ವಿದ್ಯಾರ್ಥಿಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸುವುದು ಮತ್ತು ಮನುಷ್ಯರ ಸಂಬಂಧಗಳಲ್ಲಿ ಭಾಷೆ ಕುಲ ಗೋತ್ರ ಮತ್ತು ಧರ್ಮ ಎಲ್ಲವೂ ಪರಸ್ಪರ ಭಿನ್ನವಾಗಿದ್ದು ಆದರೆ ಮಾನವ ಧರ್ಮ ಒಂದೇ ಎಂಬ ಮಾದರಿ ನೆರೆ ಹೊರೆ, ಮಾದರಿ ಸಮಾಜ,ಎಂಬ ಶೀರ್ಷಿಕೆ ಅಡಿಯಲ್ಲಿ ನೆರೆ ಹೊರೆ ಯವರ ಹಕ್ಕುಗಳ ಕುರಿತು ರಾಷ್ಟ್ರೀಯ ಮಟ್ಟದ ಅಭಿಯಾನವನ್ನು ನವೆಂಬರ್ 21 -2025 ರಿಂದ ನವೆಂಬರ್ 30 ರವರೆಗೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಈ ಕಾರ್ಯಕ್ರಮಕ್ಕೆ ಸಾರ್ವಜನಿಕರೆಲ್ಲರೂ ಸಹಕರಿಸಿ ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಮಾ ಅತೆ ಇಸ್ಲಾಮಿ ಹಿಂದ್ ನ ಮುಖಂಡರಾದ ಆದಿಲ್ ಪಾಷರವರು ಉಪಸ್ಥಿತರಿದ್ದರು.
ತರೀಕೆರೆ ತಾಲೂಕಿನ ಶಿವಪುರದ ತೋಟವೊಂದರಲ್ಲಿ ಕೂಲಿ ಕಾರ್ಮಿಕರ ವಸತಿಗೃಹದಲ್ಲಿ ಆಟ ಆಡುತ್ತಿದ್ದ ಐದು ವರ್ಷದ ಸಾನ್ವಿ ಎಂಬ ಮಗುವಿನ ಮೇಲೆ ಇಂದು ಸಂಜೆ ಚಿರತೆ ದಾಳಿ ಮಾಡಿ ಮಗುವನ್ನು ಬಲಿ ಪಡೆದಿರುತ್ತದೆ .ಮಗುವಿನ ಪೋಷಕರು ಬಿಜಾಪುರ ಮೂಲದವರು ಎಂದು ತಿಳಿದು ಬಂದಿರುತ್ತದೆ. ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ 20 ಲಕ್ಷ ಪರಿಹಾರ ಘೋಷಿಸಿರುತ್ತಾರೆ.
ಬೆಂಗಳೂರು: ಇಂದು ವಿಧಾನಸೌಧದ ಮೆಟ್ಟಿಲುಗಳ ಮೇಲೆ 71ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮವನ್ನು ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಉದ್ಘಾಟಿಸಿದ್ದಾರೆ. ಈ ವೇಳೆ ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿ, ಮಧುಗಿರಿಯ ಮಿಡಿಗೇಶಿಯಲ್ಲಿ 20 ನವಿಲು, ಬಂಡೀಪುರದಲ್ಲಿ 19 ಕೋತಿಗಳ ಸಾವು ಅತೀವ ನೋವು ತಂದಿದ್ದು, ವನ್ಯಜೀವಿ ಸಂರಕ್ಷಣೆಯ ಜವಾಬ್ದಾರಿ ಹೆಚ್ಚಿಸಿದೆ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ. ಕರ್ನಾಟಕ ರಾಜ್ಯ ವನ್ಯಜೀವಿ ಸಂರಕ್ಷಣಾ ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದೆ. ಆದರೂ ಇಂತಹ ಘಟನೆಗಳು ನಡೆಯುತ್ತಿರುವುದು ದುರ್ದೈವ. ಭೂಮಿಯಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದ್ದು, ವನ ಪ್ರದೇಶ ಕ್ಷೀಣಿಸುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ವನ್ಯಜೀವಿಗಳೊಂದಿಗೆ ಸಹಬಾಳ್ವೆ ಅನಿವಾರ್ಯವಾಗಿದೆ. ವನ್ಯಜೀವಿಗಳು ಪ್ರಕೃತಿ ಸಮತೋಲನ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಈ ಬಗ್ಗೆ ಜಾಗೃತಿ ಮೂಡಿಸುವುದೇ ಈ ಸಪ್ತಾಹದ ಉದ್ದೇಶವಾಗಿದೆ ಎಂದರು.
ವರದಿ : J .ಲಿಂಗರಾಜು. ರಾಜಕೀಯವಾಗಿ ಕಾಂಗ್ರೆಸ್ ನಿಂದ ಇಂದಿರಾ ಗಾಂಧಿಯನ್ನು ಪ್ರಧಾನಿಯನ್ನಾಗಿ ಮಾಡಿದ ಜಿಲ್ಲೆ ನಮ್ಮ ಚಿಕ್ಕಮಗಳೂರಿಗೆ ಸಲ್ಲುತ್ತದೆ ,ಆದರೆ ಅದೇ ಪಕ್ಷವು ಇಂದು ಚಿಕ್ಕಮಗಳೂರು ಜಿಲ್ಲೆ ಕಾಂಗ್ರೆಸ್ ಶಾಸಕರನ್ನುಅಸಡ್ಡೆಯಿಂದ ನೋಡುತ್ತಿದೆ. ಜಿಲ್ಲೆಗೆ ಕಾಂಗ್ರೆಸ್ ಪಕ್ಷವು ಮಂತ್ರಿ ಭಾಗ್ಯ ಕೊಟ್ಟು ಎರಡು ದಶಕಗಳೇ ಕಳೆಯುತ್ತಿದೆ, ಸಗೀರ್ ಅಹಮದ್, ಮೋಟಮ್ಮ ನಂತರ ಜಿಲ್ಲೆಗೆ ಕಾಂಗ್ರೆಸ್ ಮಂತ್ರಿ ಭಾಗ್ಯವನ್ನು ಕರುಣಿಸಿಲ್ಲ ಕಾಂಗ್ರೆಸ್ನ ಭದ್ರಕೋಟೆಯಾಗಿದ್ದ ಚಿಕ್ಕಮಗಳೂರು ಜಿಲ್ಲೆ ಹಿಂದುತ್ವ ಮತ್ತು ದತ್ತ ಪೀಠದ ವಿಷಯದಲ್ಲಿ ರಾಜಕೀಯ ವಾಗಿ ಬದಲಾಗಿ ಕಾಂಗ್ರೆಸ್ ಮುಕ್ತ ಜಿಲ್ಲೆಯಾಗಿತ್ತು .2013ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ತರೀಕೆರೆ ಕ್ಷೇತ್ರ ಮಾತ್ರ ಕಾಂಗ್ರೆಸ್ ಗೆ ಒಲಿದು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು, ಜಿಲ್ಲೆಯಲ್ಲಿದ್ದ ಏಕೈಕ ಕಾಂಗ್ರೆಸ್ ಶಾಸಕ ಜಿ, ಹೆಚ್, ಶ್ರೀನಿವಾಸ್ ರವರಿಗೂ ಕೂಡ ಯಾವುದೇ ಹುದ್ದೆ ನೀಡಿರಲಿಲ್ಲ ಇನ್ನು ಬದಲಾದ ರಾಜಕೀಯ ಸನ್ನಿವೇಶದಲ್ಲಿ 2023ರ ಚುನಾವಣೆಯಲ್ಲಿ ಜಿಲ್ಲೆಯ ಜನತೆ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಆಶೀರ್ವಾದ ಮಾಡಿದ್ದರು. ಅದರಲ್ಲಿ ಶೃಂಗೇರಿ ಶಾಸಕರಾದ ಟಿ,ಡಿ, ರಾಜೇಗೌಡರಿಗೆ KREDL ಸಂಸ್ಥೆಯ ಚೇರ್ಮನ್ ಮಾಡಿದ್ದು ಬಿಟ್ಟರೆ ಕಾಂಗ್ರೆಸ್ ಜಿಲ್ಲೆಗೆ ಯಾವುದೇ ರಾಜಕೀಯ ಸ್ಥಾನಮಾನ ಮಾಡಿರುವುದಿಲ್ಲ. ಇನ್ನು ಜಿಲ್ಲೆಯ ರಾಜ್ಯ ಮುಖಂಡ ರಾದ ಬಿ,ಎಲ್ ಶಂಕರ್ ರವರಿಗೆ ಚಿತ್ರಕಲಾ ಪರಿಷತ್ ಅಧ್ಯಕ್ಷ ಸ್ಥಾನ ಕೊಟ್ಟಿದ್ದು ಬಿಟ್ಟರೆ ಕಾರ್ಯಕರ್ತರಿಗೆ ಕೆಲಸಕ್ಕೆ ಬಾರದ ಹುದ್ದೆ ಕರುಣಿಸಿರುತ್ತದೆ .ಪ್ರಸಕ್ತವಾಗಿ ಜಿಲ್ಲೆಯಲ್ಲಿ ಐದು ಜನ ಕಾಂಗ್ರೆಸ್ ಶಾಸಕರಿದ್ದು ಅದರಲ್ಲಿ ಮೂರು ಜನ ನೂತನ ಶಾಸಕರು ಇರುತ್ತಾರೆ. ಕಾಂಗ್ರೆಸ್ನಂತ ಪಕ್ಷದಲ್ಲಿ ನೂತನ ಶಾಸಕರಿಗೆ ಸಚಿವ ಸ್ಥಾನವಿರಲಿ ನಿಗಮ ಮಂಡಳಿಗೂ ಕೂಡ ಹತ್ತಿರ ಬಿಟ್ಟುಕೊಳ್ಳುವುದಿಲ್ಲ ಇನ್ನು ಉಳಿದ ಶಾಸಕರೆಂದರೆ ತರೀಕೆರೆ ಕ್ಷೇತ್ರದ ಜಿ. ಹೆಚ್ ಶ್ರೀನಿವಾಸ .ಎರಡನೇ ಬಾರಿ ಶಾಸಕರಾಗಿರುವ ಶ್ರೀನಿವಾಸ್ ರವರು ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಆಪ್ತ ವಲಯದಲ್ಲಿ ಗುರುತಿಸಿ ಕೊಂಡಿರುತ್ತಾರೆ. ತಮ್ಮ ಆಪ್ತ ವಲಯದ ದಲ್ಲಿರುವ ಶ್ರೀನಿವಾಸ್ ರವರಿಗೆ ಸಿದ್ದರಾಮಯ್ಯನವರು ಈ ಬಾರಿ ಸಂಪುಟ ಪುನಾರಚನೆ ಸಮಯದಲ್ಲಿ ಆಶೀರ್ವಾದ ಮಾಡುತ್ತಾರಾ ಕಾದು ನೋಡಬೇಕು.,?? ಶ್ರೀನಿವಾಸ್ ರವರಿಗೆ ಜಿಲ್ಲಾ ಕೋಟ ನಿಂದ ಸಚಿವ ಸ್ಥಾನ ಸಿಗದಿದ್ದರೆ ಜಾತಿ ಕೋಟದಿಂದ ಸಚಿವ ಸ್ಥಾನ ಖಂಡಿತ ಸಿಗಲಾರದು ಕುರುಬ ಸಮುದಾಯದ ಕೋಟದಿಂದ ಕೊಪ್ಪಳದ ರಾಘವೇಂದ್ರ ಹಿಟ್ನಾಳ್ ಮತ್ತು ಹೊಸದುರ್ಗದ ಬಿ.ಜಿ ಗೋವಿಂದಪ್ಪ ಪ್ರಮುಖ ಸ್ಥಾನದಲ್ಲಿದ್ದಾರೆ ಆದ್ದರಿಂದ ಸಿದ್ದರಾಮಯ್ಯನವರು ಜಿಲ್ಲೆಗೆ ಮುಂದಿನ ಅವಧಿಗಾದರೂ ಜಿಲ್ಲೆಯ ಒಬ್ಬ ಶಾಸಕರನ್ನು ಮಂತ್ರಿ ಮಾಡಿ ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸುತ್ತಾರೆಂದು ಜಿಲ್ಲೆಯ ಜನತೆ ಕಾದು ಕುಳಿತಿದೆ.