ಸ್ಥಳೀಯ

ಲಕ್ಕವಳ್ಳಿಯಲ್ಲಿ ನೂತನ ಆಸ್ಪತ್ರೆ ಉದ್ಘಾಟನೆ.

Admin October 7, 2025 0

 1

ತರೀಕೆರೆ : ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವವರಿಗೆ ಏಜೆನ್ಸಿಗಳು ಸರಿಯಾದ ಸಮಯಕ್ಕೆ ಮತ್ತು ನೀಡುವ ವೇತನದಲ್ಲೂ ವ್ಯತ್ಯಾಸ ಮಾಡುತ್ತಿರುವುದು ಸರ್ಕಾರ ಗಮನಕ್ಕೆ ಬಂದಿದ್ದು, ಈ ಸಮಸ್ಯೆ ಪರಿಹರಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಹಕಾರವನ್ನು ಸ್ಥಾಫಿಸಿ ಆ ಸಹಕಾರ ಸಂಘದ ಮೂಲಕ ನೌಕರರಿಗೆ ವೇತನವನ್ನು ಪಾವತಿಸಲು ಸರ್ಕಾರ ಮುಂದಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‍ ಗುಂಡುರಾವ್ ಹೇಳಿದರು. 

ಅವರು ತಾಲ್ಲೂಕಿನ ಲಕ್ಕವಳ್ಳಿ ಗ್ರಾಮದಲ್ಲಿ ರೂ. 9 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. 

ಇದುವರೆಗೂ ಖಾಸಗಿ ಏಜೆನ್ಸಿಯವರು ನಿರ್ವಹಿಸುತ್ತಿದ್ದ 108 ಅಂಬುಲೆನ್ಸ್‍ಗಳನ್ನು ಸಹ ಸರಿಯಾಗಿ ನಿರ್ವಹಿಸಿದ ಕಾರಣ, ಇನ್ನು ಮುಂದೆ ಸರ್ಕಾರವೇ ಇವುಗಳನ್ನು ನಿರ್ವಹಣೆ ಮಾಡಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕಡ್ಡಾಯ ವೈದ್ಯಕೀಯ ಸೇವೆ ಸಲ್ಲಿಸಲು ಕೆಲವು ಅಡಚಣೆಗಳಿದ್ದವು. ಈಗ ಸರ್ಕಾರದಲ್ಲಿ ಈ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲಾಗಿದೆ. ಇದರ ನಂತರ 1850 ಎಂ.ಬಿ.ಬಿ.ಎಸ್. ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದರು. 

ಆರೋಗ್ಯ ಮತ್ತು ಶಿಕ್ಷಣ ಸರಿ ಇದ್ದರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಕುಟುಂಬದಲ್ಲಿ ಆರೋಗ್ಯ ಸರಿ ಇಲ್ಲದಿದ್ದರೆ ಆರ್ಥಿಕ ವ್ಯವಸ್ಥೆ ಅಸ್ತವ್ಯಸ್ತವಾಗುತ್ತದೆ. ಆದ್ದರಿಂದ ಪ್ರತಿಯೊಂದು ಆರೋಗ್ಯ ಕೇಂದ್ರದಲ್ಲೂ ದಿನದ 24 ಗಂಟೆಯೂ ವೈದ್ಯರು, ನರ್ಸ್ ಮತ್ತು ಸಿಬ್ಬಂದಿಗಳು ರೋಗಿಗಳು ಯಾವಾಗ ಬಂದರೂ ಲಭ್ಯವಾಗಬೇಕು. ಈ ಬಗ್ಗೆ ಜಿ್ಲ್ಲಾ ಮತ್ತು ತಾಲ್ಲೂಕು ವೈದ್ಯಾಧಿಕಾರಿಗಳು ನಿಗಾವಹಿಸಬೇಕು ಎಂದರು. 

ರಾಜ್ಯ ಎಲ್ಲಾ ಎಲ್ಲಾ ಆಸ್ಪತ್ರೆಗಳ ನಿರ್ವಹಣೆ, ಔಷಧಿಗಳ ದಾಸ್ತಾನು, ಗುಣಮಟ್ಟ, ಸಿಬ್ಬಂದಿಗಳ ಕಾರ್ಯವೈಖರಿ ಬಗ್ಗೆ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಪ್ರತಿನಿತ್ಯ ಪರಿಶೀಲಿಸಲಾಗುತ್ತಿದೆ. ಹೆರಿಗೆ ಆಸ್ಪತ್ರೆಗಳಲ್ಲಿ ಪ್ರತಿ ತಿಂಗಳು 300 ರಿಂದ 400 ಹೆರಿಗೆಗಳು ಆಗುವಂತೆ ನೋಡಿಕೊಳ್ಳಬೇಕು. ಇದರಿಂದ ಸಾರ್ವಜನಿಕರು ಖಾಸಗಿ ಆಸ್ಪತ್ರೆಗಳಿಗೆ ಹೋಗುವುದನ್ನು ತಡೆಗಟ್ಟಿದಂತಾಗುತ್ತದೆ. ಆಗ ಜನರಲ್ಲಿ ವಿಶ್ವಾಸ ಮೂಡುತ್ತದೆ ಎಂದರು.

ಇಲಾಖೆ ಒಂದು ಕಡೆ ಚಿಕಿತ್ಸೆ. ಮತ್ತೊಂದು ಕಡೆ ರೋಗ ಬಾರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ನಿರ್ವಹಿಸುತ್ತಿದೆ. ಜನರು ರೋಗ ಬಾರದಂತೆ ಎಚ್ಚರಿಕೆ ವಹಿಸಬೇಕು. ಬಿ.ಪಿ., ಶುಗರ್, ಕ್ಯಾನ್ಸರ್ ಮತ್ತೀತರೆ ರೋಗ ಲಕ್ಷಣಗಳು ಕಂಡು ಬಂದ ಲಕ್ಷಣ ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ಪಡೆದುಕೊಳ್ಳಬೇಕು. ರೋಗ ಉಲ್ಬಣಗೊಂಡಾಗ ಪ್ರಯೋಜನವಾಗುವುದಿಲ್ಲ ಎಂದರು. 

ಇಂಧನ ಮತ್ತು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಮಾತನಾಡಿ ರಾಜ್ಯದಲ್ಲಿ ಜಾರಿಯಲ್ಲಿರುವ ಗ್ಯಾರಂಟಿ ಯೋಜನೆಗಳು ಮಹಿಳೆಯರಿಗೆ ಶಕ್ತಿ ತುಂಬುವ ಯೋಜನೆಗಳಾಗಿವೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರ ಪಾತ್ರ ದೊಡ್ಡದು. ಕೋವಿಡ್‍ ಸಂದರ್ಭದಲ್ಲಿ ಮಹಿಳೆಯರು ಕುಟುಂಬ ನಿರ್ವಹಿಸುವಲ್ಲಿ ಬಹಳಷ್ಟು ತೊಂದರೆಗಳನ್ನು ಅನುಭವಿಸಿದ್ದನ್ನು ಪಾದಯಾತ್ರೆ ಸಂದರ್ಭದಲ್ಲಿ ನಮ್ಮ ನಾಯಕ ರಾವುಲ್‍ ಗಾಂಧಿ ಮನಗಂಡು ಆರ್ಥಿಕ ಮಟ್ಟ ಸುಧಾರಿಸಲು ಈ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಬಗ್ಗೆ ಸೂಚನೆ ನೀಡಿದ್ದರು ಎಂದರು. 

ನಮ್ಮ ಪಕ್ಷ ಯಾರು ಆರ್ಥಿವಾಗಿ ಹಿಂದುಳಿದಿದ್ದಾರೆ. ಅವರ ಪರವಾಗಿ ಮಾಡುತ್ತಿದ್ದೇವೆ. ನಮ್ಮ ಪಕ್ಷದಲ್ಲಿ ಜಾತಿ ಇಲ್ಲ. ಪ್ರತಿಯೊಬ್ಬರು ಸಮಾಜದಲ್ಲಿ ಮೇಲ್ತಸ್ಥರಕ್ಕೆ ತರುವುದೇ ನಮ್ಮ ಪಕ್ಷದ ಉದ್ದೇಶವಾಗಿದೆ ಎಂದರು. 

ಸದ್ಯ ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ. 2013ರಲ್ಲಿ ಸೌರಶಕ್ತಿ ವಿದ್ಯುತ್ ಪ್ಲಾಟ್ ಸ್ಥಾಪಿಸಿ ಅತ್ಯಧಿಕ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಅದಲ್ಲದೆ ಶರಾವತಿ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ 
ನೀರಿನ ಮರು ಬಳಕೆ ಮಾಡುವುದರ ಮೂಲಕ ಈಗ 1000 ಮೆಗ್ಯಾವ್ಯಾಟ್ ವಿದ್ಯುತ್ ಉತ್ಪಾದನೆ ಯಾಗುತ್ತಿದೆ. ಇಲ್ಲಿ ಇನ್ನೂ 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಿ ಒಟ್ಟು 3000 ಮೆಗಾವ್ಯಾಟ್‍ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದರು.

ಶಾಸಕ ಜಿ.ಎಚ್. ಶ್ರೀನಿವಾಸ್ ಮಾತನಾಡಿ ಗ್ಯಾರಂಟಿ ಯೋಜನೆಗಳಿಂದ ದೇಶದಲ್ಲಿಯೇ ನಮ್ಮ ರಾಜ್ಯದ ಮಹಿಳೆಯರ ತಲಾ ಆದಾಯ ಹೆಚ್ಚಾಗಿದೆ ಎಂದು ವರದಿಯಾಗಿದೆ. ಅದೇ ರೀತಿ ಅಭಿವೃದ್ಧಿ ಕೆಲಸಗಳು ಸಹ ಭರದಿಂದ ನಡೆಯುತ್ತಿವೆ ಎಂದರು.

ಲಕ್ಕವಳ್ಳಿಯಲ್ಲಿ ಉದ್ಘಾಟನೆಯಾದ ಸಮುದಾಯ ಆರೋಗ್ಯ ಕೇಂದ್ರ, ತರೀಕೆರೆ ಪಟ್ಟಣದ ಸಾರ್ವಜನಿಕರ ಆಸ್ಪತ್ರೆಗೆ ಮತ್ತು ಕ್ಷೇತ್ರದ ಕೆಲವು ಗ್ರಾಮಗಳಲ್ಲಿರುವ ಆರೋಗ್ಯ ಕೇಂದ್ರಗಳಿಗೆ ವಿಶೇಷ ತಂತ್ರಜ್ಞಾನದ ಉಪಕರಣಗಳು ಮತ್ತು ಸಿಬ್ಬಂದಿಗಳ ಕೊರತೆಗಳ ಬಗ್ಗೆ ಸಚಿವರ ಗಮನ ಸೆಳೆದರು. 

ಈ ಸಮಾರಂಭದಲ್ಲಿ ಚಿತ್ರದುರ್ಗ ಲೋಕಸಬಾ ಕ್ಷೇತ್ರದ ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಲಕ್ಕವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ರೆಹಮಾನ್, ಉಪಾಧ್ಯಕ್ಷೆ ಭವಾನಿ ಜಿ. ಮತ್ತು ಸದಸ್ಯರು, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಪಂಚಾಯಿತಿ ಸಿಇಓ ಎಚ್.ಎಸ್. ಕೀರ್ತನಾ, ಚಿಕ್ಕಮಗಳೂರು ಪೋಲೀಸ್ ಅಧಿಕ್ಷಕ ಡಾ. ವಿಕ್ರಮ್‍ ಅಮಟೆ, ಆರೋಗ್ಯ ಇಲಾಕೆ ಜಂಟಿ ನಿರ್ದೇಶಕಿ ಡಾ. ಮಲ್ಲಿಕಾ ಬಿ. ಇದ್ದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ್ ಸ್ವಾಗತಿಸಿದರು. ಪ್ರಾರ್ಥನೆ ವೀಣಾ, ಜ್ಯೋತಿ ಮತ್ತು ಅನುಷಾ ನಿರೂಪಿಸಿದರು.   

 

Popular post
ರಾಜಕೀಯವಾಗಿ ಕಾಂಗ್ರೆಸನಿಂದ ಶಾಪಗ್ರಸ್ತ ಜಿಲ್ಲೆಯಾದ ಚಿಕ್ಕಮಗಳೂರು ..!!??

ವರದಿ : J .ಲಿಂಗರಾಜು. ರಾಜಕೀಯವಾಗಿ ಕಾಂಗ್ರೆಸ್ ನಿಂದ ಇಂದಿರಾ ಗಾಂಧಿಯನ್ನು ಪ್ರಧಾನಿಯನ್ನಾಗಿ ಮಾಡಿದ ಜಿಲ್ಲೆ ನಮ್ಮ ಚಿಕ್ಕಮಗಳೂರಿಗೆ ಸಲ್ಲುತ್ತದೆ ,ಆದರೆ ಅದೇ ಪಕ್ಷವು ಇಂದು  ಚಿಕ್ಕಮಗಳೂರು ಜಿಲ್ಲೆ ಕಾಂಗ್ರೆಸ್ ಶಾಸಕರನ್ನುಅಸಡ್ಡೆಯಿಂದ ನೋಡುತ್ತಿದೆ. ಜಿಲ್ಲೆಗೆ ಕಾಂಗ್ರೆಸ್ ಪಕ್ಷವು ಮಂತ್ರಿ ಭಾಗ್ಯ ಕೊಟ್ಟು ಎರಡು ದಶಕಗಳೇ ಕಳೆಯುತ್ತಿದೆ, ಸಗೀರ್ ಅಹಮದ್,  ಮೋಟಮ್ಮ ನಂತರ ಜಿಲ್ಲೆಗೆ ಕಾಂಗ್ರೆಸ್ ಮಂತ್ರಿ ಭಾಗ್ಯವನ್ನು ಕರುಣಿಸಿಲ್ಲ ಕಾಂಗ್ರೆಸ್ನ ಭದ್ರಕೋಟೆಯಾಗಿದ್ದ ಚಿಕ್ಕಮಗಳೂರು ಜಿಲ್ಲೆ ಹಿಂದುತ್ವ ಮತ್ತು ದತ್ತ ಪೀಠದ ವಿಷಯದಲ್ಲಿ ರಾಜಕೀಯ ವಾಗಿ ಬದಲಾಗಿ ಕಾಂಗ್ರೆಸ್ ಮುಕ್ತ ಜಿಲ್ಲೆಯಾಗಿತ್ತು .2013ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ತರೀಕೆರೆ ಕ್ಷೇತ್ರ ಮಾತ್ರ ಕಾಂಗ್ರೆಸ್ ಗೆ ಒಲಿದು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು, ಜಿಲ್ಲೆಯಲ್ಲಿದ್ದ ಏಕೈಕ ಕಾಂಗ್ರೆಸ್ ಶಾಸಕ ಜಿ, ಹೆಚ್, ಶ್ರೀನಿವಾಸ್ ರವರಿಗೂ ಕೂಡ ಯಾವುದೇ ಹುದ್ದೆ ನೀಡಿರಲಿಲ್ಲ ಇನ್ನು ಬದಲಾದ ರಾಜಕೀಯ ಸನ್ನಿವೇಶದಲ್ಲಿ 2023ರ ಚುನಾವಣೆಯಲ್ಲಿ ಜಿಲ್ಲೆಯ ಜನತೆ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಆಶೀರ್ವಾದ ಮಾಡಿದ್ದರು. ಅದರಲ್ಲಿ ಶೃಂಗೇರಿ ಶಾಸಕರಾದ ಟಿ,ಡಿ, ರಾಜೇಗೌಡರಿಗೆ  KREDL ಸಂಸ್ಥೆಯ ಚೇರ್ಮನ್ ಮಾಡಿದ್ದು ಬಿಟ್ಟರೆ ಕಾಂಗ್ರೆಸ್ ಜಿಲ್ಲೆಗೆ ಯಾವುದೇ ರಾಜಕೀಯ ಸ್ಥಾನಮಾನ ಮಾಡಿರುವುದಿಲ್ಲ. ಇನ್ನು ಜಿಲ್ಲೆಯ ರಾಜ್ಯ ಮುಖಂಡ ರಾದ ಬಿ,ಎಲ್ ಶಂಕರ್ ರವರಿಗೆ ಚಿತ್ರಕಲಾ ಪರಿಷತ್ ಅಧ್ಯಕ್ಷ ಸ್ಥಾನ  ಕೊಟ್ಟಿದ್ದು ಬಿಟ್ಟರೆ  ಕಾರ್ಯಕರ್ತರಿಗೆ ಕೆಲಸಕ್ಕೆ ಬಾರದ ಹುದ್ದೆ ಕರುಣಿಸಿರುತ್ತದೆ .ಪ್ರಸಕ್ತವಾಗಿ ಜಿಲ್ಲೆಯಲ್ಲಿ ಐದು ಜನ ಕಾಂಗ್ರೆಸ್ ಶಾಸಕರಿದ್ದು ಅದರಲ್ಲಿ ಮೂರು ಜನ ನೂತನ ಶಾಸಕರು ಇರುತ್ತಾರೆ. ಕಾಂಗ್ರೆಸ್ನಂತ ಪಕ್ಷದಲ್ಲಿ ನೂತನ ಶಾಸಕರಿಗೆ ಸಚಿವ ಸ್ಥಾನವಿರಲಿ ನಿಗಮ ಮಂಡಳಿಗೂ ಕೂಡ ಹತ್ತಿರ ಬಿಟ್ಟುಕೊಳ್ಳುವುದಿಲ್ಲ ಇನ್ನು ಉಳಿದ ಶಾಸಕರೆಂದರೆ ತರೀಕೆರೆ ಕ್ಷೇತ್ರದ ಜಿ. ಹೆಚ್ ಶ್ರೀನಿವಾಸ .ಎರಡನೇ ಬಾರಿ ಶಾಸಕರಾಗಿರುವ ಶ್ರೀನಿವಾಸ್ ರವರು ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಆಪ್ತ ವಲಯದಲ್ಲಿ ಗುರುತಿಸಿ ಕೊಂಡಿರುತ್ತಾರೆ. ತಮ್ಮ ಆಪ್ತ ವಲಯದ ದಲ್ಲಿರುವ ಶ್ರೀನಿವಾಸ್ ರವರಿಗೆ ಸಿದ್ದರಾಮಯ್ಯನವರು ಈ ಬಾರಿ ಸಂಪುಟ ಪುನಾರಚನೆ ಸಮಯದಲ್ಲಿ ಆಶೀರ್ವಾದ ಮಾಡುತ್ತಾರಾ ಕಾದು ನೋಡಬೇಕು.,?? ಶ್ರೀನಿವಾಸ್ ರವರಿಗೆ ಜಿಲ್ಲಾ ಕೋಟ ನಿಂದ ಸಚಿವ ಸ್ಥಾನ ಸಿಗದಿದ್ದರೆ ಜಾತಿ ಕೋಟದಿಂದ ಸಚಿವ ಸ್ಥಾನ ಖಂಡಿತ ಸಿಗಲಾರದು ಕುರುಬ ಸಮುದಾಯದ ಕೋಟದಿಂದ ಕೊಪ್ಪಳದ ರಾಘವೇಂದ್ರ ಹಿಟ್ನಾಳ್ ಮತ್ತು ಹೊಸದುರ್ಗದ ಬಿ.ಜಿ ಗೋವಿಂದಪ್ಪ ಪ್ರಮುಖ ಸ್ಥಾನದಲ್ಲಿದ್ದಾರೆ ಆದ್ದರಿಂದ ಸಿದ್ದರಾಮಯ್ಯನವರು ಜಿಲ್ಲೆಗೆ ಮುಂದಿನ ಅವಧಿಗಾದರೂ ಜಿಲ್ಲೆಯ ಒಬ್ಬ ಶಾಸಕರನ್ನು ಮಂತ್ರಿ ಮಾಡಿ ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸುತ್ತಾರೆಂದು ಜಿಲ್ಲೆಯ ಜನತೆ ಕಾದು ಕುಳಿತಿದೆ.

ತರೀಕೆರೆ ಪೊಲೀಸರ ಕಾರ್ಯಾಚರಣೆ ಇಬ್ಬರು ಮನೆಗಳ್ಳರ ಬಂಧನ.

ಮನೆ ಕಳ್ಳತನ ನಡೆದ ಎರಡೇ ದಿನದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ತರೀಕೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.  ದಿನಾಂಕ 19/ 11/ 2025ರಂದು ತರೀಕೆರೆ ತಾಲೂಕಿನ ಎರೆಹಳ್ಳಿ ಗ್ರಾಮದ ಆಶಾ ಎಂಬುವವರ ಮನೆಯ ಮೇಲ್ಚಾವಣಿ ಮುರಿದು 96 ಗ್ರಾಂ ಚಿನ್ನ ಮತ್ತು 8000 ನಗದು ಕಳ್ಳತನವಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅದೇ ಗ್ರಾಮದ ರಾಮಕೃಷ್ಣ ಮತ್ತು ಮೇಘರಾಜ್ ಎಂಬ ಕಳ್ಳರನ್ನು ಪತ್ತೆ ಮಾಡಿ ಅವರಿಂದ ಒಂಬತ್ತು ಲಕ್ಷದ 63 ಸಾವಿರ ಮೌಲ್ಯದ ಚಿನ್ನಾಭರಣ ಮತ್ತು 4, 400 ಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ಈ ಕಾರ್ಯಚರಣೆಯಲ್ಲಿ ತರೀಕೆರೆ ಪೊಲೀಸ್ ನಿರೀಕ್ಷಕರಾದ ರಾಮಚಂದ್ರ ನಾಯಕ್, ಪಿಎಸ್ಐ ಗಳಾದ ಮಂಜುನಾಥ್ ಮನ್ನಂಗಿ, ದೇವೇಂದ್ರ ರಾಥೋಡ್, ಹಾಗೂ ಸಿಬ್ಬಂದಿಗಳಾದ ರಾಮಪ್ಪ, ರುದ್ರೇಶ್, ರಿಯಾಜ್, ಧನಂಜಯ ಸ್ವಾಮಿ, ಶ್ರೀನಿವಾಸ್, ರವರು ಭಾಗವಹಿಸಿದ್ದರು. ಈ ಕಾರ್ಯಚರಣೆಯನ್ನು ಚಿಕ್ಕಮಗಳೂರು ಜಿಲ್ಲಾ ಪೊಲೀಸರು ಅಧಿಕ್ಷಕರಾದ ವಿಕ್ರಮ ಅಮಟೆ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಿ.ಟಿ ಜಯಕುಮಾರ್ ಮತ್ತು ತರೀಕೆರೆ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷರಾದ ಪರಶುರಾಮಪ್ಪ ನವರು ಶ್ಲಾಘಿಸಿದ್ದಾರೆ.

ಅಂಚೆ ಕಚೇರಿಯಲ್ಲಿ ಖಾಸಗಿ ಶಾಲೆ ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ

ತರಿಕೆರೆ: ಪಟ್ಟಣದ ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಲೆಯ ಮಕ್ಕಳು ಅಂಚೆ ಕಚೇರಿಯ ಬಗ್ಗೆ ತಿಳಿದುಕೊಳ್ಳಲು ತರೀಕೆರೆಯ ಪ್ರಧಾನ ಅಂಚೆ ಕಚೇರಿಗೆ ಭೇಟಿ ನೀಡಿದರು. ಆರರಿಂದ, ಹತ್ತನೇ ತರಗತಿ ವಿದ್ಯಾರ್ಥಿಗಳು ತಮ್ಮ ಶಿಕ್ಷಕರೊಂದಿಗೆ ತೆರಳಿ, ಅಂಚೆ ಕಚೇರಿಯ ಪತ್ರ ವ್ಯವಹಾರ, ಠೇವಣಿ, ಇನ್ಸೂರೆನ್ಸ್, ಮನಿ ಆರ್ಡರ್, ಉಳಿತಾಯ ಖಾತೆ, ಸುಕನ್ಯಾ ಸಮೃದ್ಧಿ ಯೋಜನೆ ಯ ,ಸಂಪೂರ್ಣ ಮಾಹಿತಿ ಪಡೆದುಕೊಂಡರು . ದೀಪಾವಳಿ ಹಬ್ಬದ ಶುಭಾಶಯ ಕೋರುವ ಆಕರ್ಷಕ ಗ್ರೀಟಿಂಗ್ ಕಾರ್ಡ್ ಗಳನ್ನು ಮಕ್ಕಳು ಸ್ವತಃ ತಯಾರಿಸಿ ಅವುಗಳನ್ನು ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕರ್ನಾಟಕ ರಾಜ್ಯಪಾಲರಿಗೆ ಶುಭಾಶಯ ಕೋರಿ ಅಂಚೆ ಮೂಲಕ ಕಳುಹಿಸಿಕೊಟ್ಟರು . ಶಾಲೆಯ ಪ್ರಾಂಶುಪಾಲರಾದ ಕಾರ್ತಿಕೇಯನ್, ಶಿಕ್ಷಕರಾದ ತೇಜಸ್ವಿ ಕುಮಾರ್, ಅನಿತಾ, ಸುಪ್ರಿಯ ಗೌಸ್ ಅಹಮದ್ ಗಿರೀಶ್ ಹಾಗೂ ಅಂಚೆ ಕಚೇರಿಯ ಪ್ರಭಾರ ಪೋಸ್ಟ್ ಮಾಸ್ಟರ್ ಅನಿತಾ ಹಾಗೂ ಕಚೇರಿ ಸಿಬ್ಬಂದಿಯಾದ ಶಿವಣ್ಣ ಮುಂತಾದವರು ಹಾಜರಿದ್ದರು

ಮೈ ದುಂಬಿಹರಿಯುತಿರುವ ಜಂಬದಹಳ್ಳ ಜಲಾಶಯಕ್ಕೆ ಬಾಗಿನ ಸಮರ್ಪಣೆ

ಮೈ ದುಂಬಿಹರಿಯುತಿರುವ ಜಂಬದಹಳ್ಳ ಜಲಾಶಯಕ್ಕೆ ಶಾಸಕರಾದ G.H ಶ್ರೀನಿವಾಸ ರವರಿಂದ ಬಾಗಿನ ಸಮರ್ಪಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಮುಖಂಡರಾದ ಟಿ. ಎನ್. ಜಗದೀಶ್, ದರ್ಶನ್ duglapura, ರವಿ ಶಾಂತಿಪುರ, ಮತ್ತು ಸಿದ್ದರಹಳ್ಳಿ ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.

ದೋರನಾಳು ಗ್ರಾಮದಲ್ಲಿ ಐ.ಡಿ.ಬಿ.ಐ ಬ್ಯಾಂಕ್ ನಿಂದಕೃಷಿ ಸಾಲ ಮೇಳ.

ತರೀಕೆರೆಯ ಐ.ಡಿ.ಬಿ.ಐ ಬ್ಯಾಂಕ್ ವತಿಯಿಂದ ದಿನಾಂಕ 8 12 2025 ರಂದು ದೋರನಾಳು ಗ್ರಾಮ ಬಯಲು ರಂಗ ಮಂದಿರದಲ್ಲಿ ದಲ್ಲಿ ರೈತರಿಗೆ ಕೃಷಿ ಸಾಲ ಮೇಳವನ್ನು ಏರ್ಪಡಿಸಲಾಗಿದೆ ಎಂದು ಐ.ಡಿ.ಬಿ.ಐ ಬ್ಯಾಂಕಿನ ವ್ಯವಸ್ಥಾಪಕರಾದ ಶ್ರೀ ಶಿವನಗೌಡ ಬಿರಾದರ್ ರವರು ತಿಳಿಸಿದ್ದಾರೆ.  ಕೃಷಿ ಸಾಲ ಮೇಳ ದಲ್ಲಿ ರೈತರಿಗೆ ಆಕರ್ಷಕ ಬಡ್ಡಿ ದರದಲ್ಲಿ ಬೆಳೆ ಸಾಲ, ವಾಹನ ಸಾಲ ,ಉಗ್ರಾಣ ಸಾಲ, ಸಂಸ್ಕರಣ ಘಟಕ ಸಾಲ, ಡೆವಲಪ್ಮೆಂಟ್ ಸಾಲ, ವನ್ನು ಸುಲಭ ಮತ್ತು ತ್ವರಿತ ಗತಿಯಲ್ಲಿ ನೀಡಲಾಗುವುದು ಆಸಕ್ತ ರೈತರು ಈ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಸ್ಥಳೀಯ

View more
ದೋರನಾಳು ಗ್ರಾಮದಲ್ಲಿ ಐ.ಡಿ.ಬಿ.ಐ ಬ್ಯಾಂಕ್ ನಿಂದಕೃಷಿ ಸಾಲ ಮೇಳ.

ತರೀಕೆರೆಯ ಐ.ಡಿ.ಬಿ.ಐ ಬ್ಯಾಂಕ್ ವತಿಯಿಂದ ದಿನಾಂಕ 8 12 2025 ರಂದು ದೋರನಾಳು ಗ್ರಾಮ ಬಯಲು ರಂಗ ಮಂದಿರದಲ್ಲಿ ದಲ್ಲಿ ರೈತರಿಗೆ ಕೃಷಿ ಸಾಲ ಮೇಳವನ್ನು ಏರ್ಪಡಿಸಲಾಗಿದೆ ಎಂದು ಐ.ಡಿ.ಬಿ.ಐ ಬ್ಯಾಂಕಿನ ವ್ಯವಸ್ಥಾಪಕರಾದ ಶ್ರೀ ಶಿವನಗೌಡ ಬಿರಾದರ್ ರವರು ತಿಳಿಸಿದ್ದಾರೆ.  ಕೃಷಿ ಸಾಲ ಮೇಳ ದಲ್ಲಿ ರೈತರಿಗೆ ಆಕರ್ಷಕ ಬಡ್ಡಿ ದರದಲ್ಲಿ ಬೆಳೆ ಸಾಲ, ವಾಹನ ಸಾಲ ,ಉಗ್ರಾಣ ಸಾಲ, ಸಂಸ್ಕರಣ ಘಟಕ ಸಾಲ, ಡೆವಲಪ್ಮೆಂಟ್ ಸಾಲ, ವನ್ನು ಸುಲಭ ಮತ್ತು ತ್ವರಿತ ಗತಿಯಲ್ಲಿ ನೀಡಲಾಗುವುದು ಆಸಕ್ತ ರೈತರು ಈ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.

Admin December 6, 2025 0

ಗ್ರಾಮ ಪಂಚಾಯತ್ ಸಿಬ್ಬಂದಿಗಳ ಪಡಿತರ ಚೀಟಿ ರದ್ದಾಗದಂತೆ ಶಾಸಕರಿಗೆ ಮನವಿ.

ರೋಗಿಗಳಿಗೆ ಸಿಹಿ ಹಂಚಿ ಜನ್ಮ ದಿನಾಚರಣೆ ಆಚರಿಸಿದ ಹಾಲುಮಠ ದ ಸ್ವಾಮೀಜಿ....

ಮಾದರಿ ನೆರೆಹೊರೆ ,ಮಾದರಿ ಸಮಾಜ ,ರಾಷ್ಟ್ರೀಯ ಅಭಿಯಾನ : ಸೈಯದ್ ಇಸ್ಮಾಯಿಲ್.

ಚಿರತೆ ದಾಳಿಗೆ ಮಗು ಬಲಿ.

ತರೀಕೆರೆ ತಾಲೂಕಿನ ಶಿವಪುರದ ತೋಟವೊಂದರಲ್ಲಿ ಕೂಲಿ ಕಾರ್ಮಿಕರ ವಸತಿಗೃಹದಲ್ಲಿ ಆಟ ಆಡುತ್ತಿದ್ದ ಐದು ವರ್ಷದ ಸಾನ್ವಿ ಎಂಬ ಮಗುವಿನ ಮೇಲೆ ಇಂದು ಸಂಜೆ ಚಿರತೆ ದಾಳಿ  ಮಾಡಿ ಮಗುವನ್ನು ಬಲಿ ಪಡೆದಿರುತ್ತದೆ .ಮಗುವಿನ ಪೋಷಕರು ಬಿಜಾಪುರ ಮೂಲದವರು ಎಂದು ತಿಳಿದು ಬಂದಿರುತ್ತದೆ. ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ   20 ಲಕ್ಷ ಪರಿಹಾರ ಘೋಷಿಸಿರುತ್ತಾರೆ.

Admin November 20, 2025 0

ಸಿಂಧನೂರು ಹತ್ತಿ ಖರೀದಿ ಕೇಂದ್ರದ ಲ್ಲಿರುವ ಅನ್ಯಭಾಷೆಯ ಸಿಬ್ಬಂದಿಗಳ ಹಾವಳಿಯನ್ನು ತಡೆಗಟ್ಟಲು ಸುರೇಶ ಗೊಬ್ಬರಕಲ್ ಒತ್ತಾಯ.

ಭುವನೇಶ್ವರಿ ಭಾವಚಿತ್ರ ಇಲ್ಲದ ರಾಜ್ಯೋತ್ಸವ.

ಕುಲುಮೆಯ ಕಮ್ಮಟನಿಗೆ ಒಲಿದ ರಾಜ್ಯ ಪ್ರಶಸ್ತಿ..

ನವ ವಧು ಹೃದಯಘಾತದಿಂದ ಸಾವು.

ತರೀಕೆರೆ: ಪಟ್ಟಣದ ದಿಲೀಪ್ ಎಂಬ ಯುವಕನೊಂದಿಗೆ 31-10.2025 ರಂದು ಅನ್ನಪೂರ್ಣೇಶ್ವರಿ ಸಮುದಾಯ ಭವನದಲ್ಲಿ ಮದುವೆ ನಡೆಯ ಬೇಕಿದ್ದ ನವ ವದು ಶೃತಿ (30 )ಇಂದು ಅಜ್ಜಂಪುರ ತಾಲೂಕು ಸೊಲ್ಲಾಪುರ ಗ್ರಾಮದ ತಮ್ಮ ನಿವಾಸದಲ್ಲಿ ಹೃದಯಘಾತದಿಂದ ಮೃತಪಟ್ಟಿದ್ದಾರೆ.

Admin October 30, 2025 0

ಮಕ್ಕಳು ಉಳಿತಾಯ ಮನೋಭಾವನೆ ಬೆಳೆಸಿಕೊಳ್ಳಬೇಕು ಟಿ.ಜಿ ಶಶಾಂಕ್

ತರೀಕೆರೆ ನೂತನ ಗ್ರಂಥಾಲಯಕ್ಕೆ ಗುದ್ದಲಿ ಪೂಜೆ.

ಅಂಚೆ ಕಚೇರಿಯಲ್ಲಿ ಖಾಸಗಿ ಶಾಲೆ ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ

0 Comments